ಆಗಸ್ಟ್ 15, 2015

ಅಹಂ ನಾನೇಶ್ವರ




ತಾನೊಂದು ಬಗೆದರೆ ದೈವ ಇನ್ನೊಂದು ಬಗೆಯುವನು ಅಂತ ದೊಡ್ಡವರು ಹೇಳಿದ್ದಾರೆ. ನಾನು ಉಪ್ಪಿ 2 ಚಿತ್ರ ನೋಡೋದು ಒಂದು ದಿನ ತಡ ಆಯ್ತು ಅಷ್ಟೇ. ಅಷ್ಟರಲ್ಲಿ ಬೇಡದೇ ಇದ್ರೂ ಕಣ್ಣಿಗೆ ಬಿದ್ದ ಫ್ರೆಂಡ್ಸ್ ಅಭಿಪ್ರಾಯಗಳು, Fb ಪುಟಗಳ ರಿವ್ಯೂಗಳನ್ನು ನೋಡಿ, ಉಪ್ಪಿ ಸಿನಿಮಾಗೆ ಮುಂಚೆನೇ ಟೈಟಲ್ ಕಾರ್ಡ್ ತೋರಿಸೋದಾದರೆ ಉಪ್ಪಿ ಅಭಿಮಾನಿಯಾದ ನಾನು ಫಿಲಂ ನೋಡೋಕೆ ಮುಂಚೆನೇ ರಿವ್ಯೂ ಯಾಕ್ ಹಾಕಬಾರದು ಅಂತ ಖಾಲಿ ನೋಟ್ ಚಿತ್ರ ತೆಗೆದು ನಮ್ ರಕ್ಷಿತ್ ಪ್ರೊಫೈಲ್ ನಲ್ಲಿ ಹಾಕಿದ್ದೆ. ಆದರೆ ಅದೇ ಸತ್ಯ ಆಗೋಯ್ತು. ಫಿಲಂ ಮುಗಿಸಿಕೊಂಡು ಬಂದ ಮೇಲೆ ಮಾತೇ ಬರ್ತಾ ಇಲ್ಲ. ಫಿಲಂ ಅಲ್ಲಿ ಏನೇನೋ ಇದೆ, ಆದರೆ ನಮ್ಮ ಬೌದ್ಧಿಕ ಯೋಚನಾ ವ್ಯಾಪ್ತಿಗೆ ನಿಲುಕಿದ್ದು ಸ್ವಲ್ಪ ಮಾತ್ರ. ಬಕಾಸುರನ ಹೊಟ್ಟೆಗೆ ಕೋಸಂಬರಿ ಎಲ್ಲಿಗಾಗುತ್ತೆ ಅಂತ ಒಂದು ಮಾತಿದೆ. ಅದರ ಉಲ್ಟಾ ಪರಿಸ್ಥಿತಿ ಈಗ ನಮ್ಮದು. ದೇವರು ಊಟ ಕೊಟ್ಟ, ಆದರೆ ಜೊತೆಗೆ ರೋಗನೂ ಕೊಟ್ಟ ಅಂತ ಸನ್ಯಾಸಿಯಾದ 'ನಾನು' ಫಿಲಂ ಅಲ್ಲಿ ಹೇಳುವ ಹಲವು ತತ್ವಗಳು ಅದ್ಭುತ ಹಾಗೂ, ಅದನ್ನು ತೋರಿಸಿರುವ ರೀತಿ ಅಪೂರ್ವ. ಇನ್ನೂ ಹೆಚ್ಚು ಬರೀಬೇಕು / ಮಾತನಾಡಬೇಕು. ಆದರೆ ಯಾವಾಗ ಹೇಗೆ ಅನ್ನೋ ಯೋಚನೆ ಬರ್ತಿದೆ. ಹಾಗಾಗಿ ಸದ್ಯಕ್ಕೆ ಯೋಚನೆ ಮಾಡೋದನ್ನ ನಿಲ್ಲಿಸಿ ಮತ್ತೆ ಹಾಜರಾಗುವೆ. ಅಲ್ಲಿವರೆಗೂ ಇಷ್ಟನ್ನೂ ಓದಿ ಸಹಿಸಿಕೊಂಡವರಿಗೆ ಒಂದು ಮಾತು:
Where there is a will, there's a way.

P.s: ಈಗ ಹೇಳಿ ನೀವು ಖುಷಿನಾ?
ನಾನಂತೂ ಖುಷ್ ಆದೆ :p
(
ಉಪ್ಪಿ  2 ಥರ ಅಂದ್ಕೊಂಡ್ರೆ ಉಪ್ಪಿ 2 ಥರ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಥರ ಅಂದ್ಕೊಂಡ್ರೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಥರ)

ಆಗಸ್ಟ್ 12, 2015

ಹಾವು ಬಂತು ಹಾವು...

3D ಚಿತ್ರಗಳನ್ನು ನೋಡಲು ಹೋದಾಗ 3D ಗ್ಲಾಸ್ ಕೊಡುವ ಹಾಗೆ, ಉಪ್ಪಿ 2 ಚಿತ್ರ ನೋಡಲು ಹೋಗೋ ಮಂದಿಗೆ ಪ್ರತಿ ಸಾಲಿನಲ್ಲಿ ಯಾರಾದರೂ ಒಬ್ಬರಿಗೆ ಪುಂಗಿ ಕೊಡುವ ಯೋಚನೆ ಇದೆಯಂತೆ.
ಯಾಕೆ ಗೊತ್ತಾ?
.
.
.
.
.
.
.
"
ಸಲ ಹುಳ ಬಿಡಲ್ಲ, ಹಾವನ್ನೇ ಬಿಡ್ತೀನಿ" ಅಂತ ಕೆಲವು ತಿಂಗಳುಗಳ ಹಿಂದೆ ಉಪ್ಪಿ ಹೇಳಿಕೆ ಕೊಟ್ಟಿದ್ರು, ಮರೆತು ಹೋಯ್ತಾ?



ಚಿತ್ರ ಕೃಪೆ: ಅಂತರ್ಜಾಲ




ಇದೇ ಸಮಯಕ್ಕೆ ಆಪ್ತರಕ್ಷಕ ಫಿಲಂ ಅಲ್ಲಿರೋ "ಹಾವನ್ನು ಯಾರದ್ರೂ ಇಟ್ಕೋತಾರೆನೋ ಮಂಗ, ಹಾವು ಇರೋದೇ ಬಿಡೋಕಲ್ವಾ" ಅಂತ ವಿಷ್ಣು ದಾದಾ ಹೇಳುವ ದೃಶ್ಯ ನೆನಪಾಗ್ತಿದೆ. ಜೋಕ್  ಅರ್ಥ ಆದವರು ಸುಮ್ಮನಿರಿ, ಅರ್ಥ ಆಗದೆ ಇರೋರು ಚಿಂಟು ಟಿವಿ ನೋಡಿ
"ಹಾವು ಬಂತು ಹಾವು" ಅಂತ ಹೇಳಿ ಚಿಕ್ಕ ಹುಳ ಬಿಟ್ಟೆ ಅಂತ ಮೂಗು ಮುರಿಯಬೇಡಿ. ಆ ಸಮಯವೂ ಬರುತ್ತಿದೆ, ಅತೀ ಶೀಘ್ರದಲ್ಲಿ!!  



ಸ್ಪೂರ್ತಿ: ನವೀನ್ ಸಾಗರ್

ಆಗಸ್ಟ್ 9, 2015

ಅಯ್ಯಯ್ಯೋ ಫೀಲಿಂಗು...


ಸಣ್ಣ ಮಕ್ಕಳಿಗೆ ಫೀಲಿಂಗ್ಸ್ ಜಾಸ್ತಿ. ಲವ್ವು / ರೊಮ್ಯಾನ್ಸಿನ ಬಗ್ಗೆ ಮಾತಾಡ್ತಾ ಇಲ್ಲ. ಸುಖ / ದುಖಃ / ನೋವು / ನಲಿವು ಇತ್ಯಾದಿ. ಸಣ್ಣ ವಿಷಯಕ್ಕೂ ಅತ್ತು ಬಿಡ್ತಾರೆ, ಏನೂ ಇಲ್ಲದಿದ್ದರೂ ನಗ್ತಾ ಇರ್ತಾರೆ. ಹೀಗಿದ್ದಾಗ ಯಾರದಾದರೂ ಸಾವಾದರೆ ಅದರ ಪ್ರಭಾವ ಮಕ್ಕಳ ಮೇಲೆ ತುಸು ಜಾಸ್ತಿಯೇ ಎನ್ನಬಹುದು. On a lighter note, ನನಗೆ ಸಣ್ಣವನಿದ್ದಾಗ ಫಿಲಂ ಅಲ್ಲಿ ಯಾರಾದ್ರೂ ಸತ್ತರೆ ತುಂಬಾ ಬೇಜಾರಾಗ್ತಿತ್ತು. ಬೇರೆಯವರ ಬಗ್ಗೆ ಗೊತ್ತಿಲ್ಲ, ನಾನಂತೂ ಬಿಕ್ಕಿ ಬಿಕ್ಕಿ ಅತ್ತಿದ್ದೇನೆ. ಹುಚ್ಚ ಫಿಲಂ ಅಲ್ಲಿ ಸುದೀಪ್ ಆಸ್ಪತ್ರೆ ವಾಹನ ಹತ್ತಿಕೊಂಡು ಹೋಗುವಾಗ, ಪ್ರೀತ್ಸೇ ಫಿಲಂ ಅಲ್ಲಿ ಉಪೇಂದ್ರ ಸತ್ತಾಗ, Fanaa ಹಾಗೂ Rang De Basanti ಚಿತ್ರಗಳನ್ನು ನೋಡಿದಾಗ ಇನ್ನಿಲ್ಲದಂತೆ ಅತ್ತಿದ್ದೇನೆ. ಆದರೆ ಕಾಲಕ್ರಮೇಣ ಒಂದಿಷ್ಟು seriousness ರೂಢಿಯಾಯಿತು. ಪಿಯುಸಿ ಓದುವಾಗ ಮುಂಗಾರು ಮಳೆ ನೋಡಿ ದೇವದಾಸ ಸತ್ತಿದ್ದರಿಂದ ಸ್ವಲ್ಪ ಮರುಕ ಹುಟ್ಟಿತ್ತು ಅಷ್ಟೇ, ಆದರೆ ಅತ್ತಿರಲಿಲ್ಲ. ಇವತ್ತು ಮತ್ತೆ ಅದೇ ಫೀಲಿಂಗ್ ಮರುಕಳಿಸಿದೆ. ಯಾಕೆ ಗೊತ್ತಾ?




ಇಬ್ಬರ ನಡುವೆ ಅಂಗಾರ ಪುಕ್ಕಟೆಯಾಗಿ ಸತ್ತನಲ್ಲಾ ಅಂತ!!

Watched rangitaranga today, and this is just the sidereal version of saying it.